ನವಭಾರತ ಯೌವನಾಧಿಪತಿಗಳು,
ಮದವೇ ಮಾವುತನಾಗಿ,ಲೋಭವಸ್ತ್ರವನುಟ್ಟು,
ಮೋಹದಾರಾಧನೆಯಲಿ,
ಅರಿವಿನ ಸ್ಮಶಾನದಿ ಸಾಮ್ರಟರಾಗಿಹೆವು;
ಮತಿಹೀನ ಮನದಜ್ಞಾನದ ತಮವ ಕರಗಿಪ,
ಜ್ಞಾನಜ್ಯೋತಿಯನು ಕರುಣಿಸು ಗುರುವೇ;
ಕಾಣದ ಗೆಲುವಿನ ಕನಸಿನಲಿ,
ಕಾಣುವ 'ಕರ್ಮ'ಕೆ ಅಂಧರು ನಾವು;
ಕಾಣುವ 'ಕರ್ಮ'ಕೆ ಅಂಧರು ನಾವು;
ಈ ಬಾಳತೊರೆಯು ಅನಂತವಾಗಲಿ,
ನಿನ್ನರಿವಿನ ಸಾಗರ ಸಂಗಮದಿ;
ಇಂದ್ರಿಯ ಪ್ರಜ್ಞೆಯ ಪರದೆಯು ಸರಿದು
ಆತ್ಮನ್ವೇಷಣ ಸಾಧನೆ ನಡೆಯಲಿ
ನಿನ್ನಯ ಜ್ಞಾನದ ಮಡಿಲಲಿ;
ಬೇಡವಾದರೂ ನೀ ಜಗಕೆ,
ನಿನ್ನ ವಿವೇಕವಾಣಿಗೆ ಸಾವಿಲ್ಲ;
ಈ ಜಗದ ಸೊಬಗೇ ನೀನಾದರೂ
ಅದ ಗುರುತಿಸದಾದೆವು ಮೌಡ್ಯದಲಿ;
ಬಾಲಿಶದಿ ಸಂತೋಷಕೆ ಕುಣಿದರು,
ಆಸೆಯ ನೋವಿಗೆ ಕೊರಗಿದರು,
ನಿನ್ನೊಡಲೇ ಮುಕ್ತಿಮಂದಿರವು ನಮಗೆ;
ನಿನ್ನ ದರುಶನ ನಯನಕೆ ತೇಜಸ್ಸು;
ದಿನಕರ ತನ್ನಕ್ಷಿಯನಾವರಿಸಿ,
ನಮಿಸಿದ ತನ್ನ ಭಕ್ತಿ ಬೆಳದಿಂಗಳ ಕಾಣಿಕೆಯನಿಟ್ಟು;
ನಿಮ್ಮ ಪರಮಜ್ಞಾನದಲಿ ಮಿಯಲೆನ್ನ ಅಂತರಾತ್ಮ ಪ್ರಭುವೇ;
ಇಂದ್ರಿಯ ಲೋಕಕೆ ಸಾವೇ ಅಧಿಪತಿ;
ವಿವೇಕಾನಂದದಿ ಪರಮಾತ್ಮನಲಿ ಮುಕ್ತಿ;
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ