ಶುಕ್ರವಾರ, ಅಕ್ಟೋಬರ್ 18, 2013

ಬಂದು ಹೋಗುವ ನಡುವೆ...

ಸುಮ್ಮನೇ ಸಾಗುತಿರಲು ಸಮಯ,
ಕಮರಿದೆ ಬರಿ ಕನಸಿನಲೇ ಈ ಹರೆಯ.. 

ಕಳೆದ ಕ್ಷಣಗಳು ಬಂದು 
ಇರುವ ಕ್ಷಣಗಳ ಕೊಂದು 
ತಂದ ನೆನಪುಗಳೋ ಬಲು ಧೂರ್ತ;
ಅನರ್ಥ ಮಾತಿನೊಳು ಬಾಳು 
ವ್ಯರ್ಥ ವ್ಯರ್ಥ !

ಬಾಳ ಬೆಳಗಬೇಕಿದೆ ಸಾಧನೆಯ ದೀಪ್ತಿ 
ಬರುವ ನಾಳೆಗಳಿಗೆ ಸಿಗಬೇಕಿದೆ 
ಸಾರ್ಥಕತೆಯ ಸಂತೃಪ್ತಿ... 




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ